........


ಮಣ್ಣ
ತಂದು ಗುಡ್ಡೆ ಮಾಡಿ
ಒಂದೆರೆಡು ಬಾರಿ ಕುಟ್ಟಿ
ನೀರು ಹಾಕಿ
ಕಣ್ಣ ಹುಬ್ಬು ತೀಡಿದರೆ
ಗಣೇಶ,  ದೇವರು ಸಿದ್ಧ 
ಎಷ್ಟು ಸುಲಭ,  ದೇವರು

ನನ್ನದೊಂದೇ ಫಿರ್ಯಾದು
ಎಷ್ಟೇ ಚಂದವಾಗಿ ತೀಡಲಿ
ನೀರಿಗಾಕಿದಾಗ ಕರಗುತ್ತೆ
ಮತ್ತೇ ಮಣ್ಣಾಗುತ್ತೆ
ದೇವರೂ ಸಹ