tag:blogger.com,1999:blog-1603146886676359114.post7180128343543981565..comments2023-05-12T00:51:29.848-07:00Comments on ಸಾಕ್ಷಿಪ್ರಜ್ಞೆ: ಶಿಕ್ಷಣ:: ಒಂದು ಸಂವಾದಅರವಿಂದhttp://www.blogger.com/profile/06813576454185264146noreply@blogger.comBlogger1125tag:blogger.com,1999:blog-1603146886676359114.post-41414035821869573672011-06-15T05:31:15.791-07:002011-06-15T05:31:15.791-07:00Vrashabaraj
Physics Professor
(ವೃಷಭರಾಜ್ ರವರು ಈ ಅಭ...Vrashabaraj <br />Physics Professor<br />(ವೃಷಭರಾಜ್ ರವರು ಈ ಅಭಿಪ್ರಾಯಗಳನ್ನ ಕಳುಹಿಸಿರುತ್ತಾರೆ. ಅವರಿಗೆ ಧನ್ಯವಾದಗಳು. ಅರವಿಂದ)<br />ಅರವಿಂದರ "ಶಿಕ್ಷಣ- ಒಂದು ಸಂವಾದ" ಉತ್ತಮ ಪ್ರಯತ್ನ. ನಮ್ಮ ಚಿಂತನೆಗೊಂದು ಸವಾಲು. ಎಲ್ಲರ ಬಗ್ಗೆ- ಎಲ್ಲದರ ಬಗ್ಗೆ ಪ್ರೀತಿ ಕಾಳಜಿ ಹೊಂದಿರುವ ಅರವಿಂದ ಯಾವತ್ತೂ ಸಮಾಜ ಮುಖಿ. ಪ್ರತಿಯೊಬ್ಬರ ಮನಸ್ಸಿನಲ್ಲಿ ಹುಟ್ಟುವ ಪ್ರಶ್ನೆಗಳಿಗೆ ಅಕ್ಷರ ರೂಪಕೊಟ್ಟು ನೀವೇನು ಮಾಡುತ್ತೀರಿ? ನಾವೇನು ಮಾಡಬೊಹುದು? ಎಂಬ ಒತ್ತಾಯದ ಕರೆಗೆ ಸ್ಪಂದಿಸಬೇಕೆಂಬ ಸಹಜ ಬಯಕೆಯಿಂದ ನನ್ನ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದೇನೆ.<br /><br />೧. "ಹೃದಯದ ಶಿಕ್ಷಣವೇ ಶಿಕ್ಷಣದ ಹೃದಯ" ಎಂಬಂತೆ ಹೃದಯವಂತಿಕೆಯನ್ನ ಹುಟ್ಟುಹಾಕುವ ಶಿಕ್ಷಣವೇ ನಿಜವಾದ ಶಿಕ್ಷಣ.<br />ಕಣ್ಣು - ಹೃದಯ - ಮನಸ್ಸು ಇವುಗಳನ್ನು ತೆರೆದಿಟ್ಟು ಪ್ರತಿಯೊಂದನ್ನೂ ವೀಕ್ಷಿಸುವ, ಪರೀಕ್ಷಿಸುವ, ಪ್ರಶ್ನಿಸುವ ರೀತಿ ಮತ್ತು ಹಕ್ಕನ್ನು ಯುವಜನತೆಗೆ ನೀಡಬೇಕು(ಕಲಿಸಬೇಕು)<br />ಇಂತಹ ಶಿಕ್ಷಣ ಇಂದಿಗೆ ಪ್ರಸ್ಥುತ ಮಾತ್ರವಲ್ಲ ಇಂದಿನ ಅಗತ್ಯ ಕೂಡ<br /><br />೨. ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡುವ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಿದರೆ ನಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೊಹುದು.<br /><br />೩. ಇಂದಿನ ಶಿಕ್ಷಣ ಪದ್ದತಿ ವ್ಯಕ್ತಿಯನ್ನು ಅಂತರ್ಮುಖಿಯನ್ನಾಗಿಸಲು ಅವಕಾಶವನ್ನೇ ನೀಡುವದಿಲ್ಲ. ಬಾಹ್ಯಾಡಂಬರವನ್ನೇ ಜೀವನ ಎಂದು ಯುವಕರು ತಿಳಿದುಕೊಂಡಿದ್ದಾರೆ. ಜೀವನ ಪ್ರೀತಿಯನ್ನು ಅತೀ ಚಿಕ್ಕ ಪ್ರಾಯದಲ್ಲಿ ಮನೆಯಿಂದಲೇ ಆರಂಬಿಸಬೇಕು. "Life is an echo" ಪ್ರೀತಿಯಿಂದ ಪ್ರೀತಿ, ಗೌರವದಿಂದ ಗೌರವ, ದ್ವೇಷದಿಂದ ದ್ವೇಷ, ಹಿಂಸೆಯಿಂದ- ಹಿಂಸೆ ಹುಟ್ಟುತ್ತದೆ ಎಂಬುದನ್ನು ಮನದಟ್ಟು ಮಾಡುವ ಜವಾಬ್ದಾರಿ ಹೆತ್ತವರಿಗೆ ಮತ್ತು ಅದ್ಯಾಪಕರಿಗಿದೆ.<br /><br />೪. No idea<br /><br />೫. ಸ್ವಾರ್ಥ. ಈ ಕುಟುಂಬ, ಸಮಾಜ, ಸಂಸ್ಥೆ, ಸರ್ಕಾರ ಎಲ್ಲವೂ ನನಗಾಗಿ. ಕೇವಲ ನನಗಾಗಿ ಎಂಬೋ ಮನೋಭಾವ. ನಾನು ಸರಿ ಎಂದು ಯೋಚಿಸುವುದು ತಪ್ಪಲ್ಲ, ಆದರೆ ನಾನು ಮಾತ್ರ ಸರಿ ಎಂಬ ದೋರಣೆ ಇಂದಿನ ಪ್ರಮಾದಕ್ಕೆ ಕಾರಣ. ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಬಗ್ಗೆ ಚಿಂತಿಸುತ್ತಾರೆಯೆ ಹೊರತು ಕರ್ತವ್ಯದ ಬಗ್ಗೆ ಯೋಚಿಸುವುದಿಲ್ಲ. ನಮ್ಮ ಶಿಕ್ಷಣ ಪದ್ದತಿ, ವಿಶಾಲ ಮನೋಭಾವ ಬೆಳೆಸುವುದರಲ್ಲಿ ವಿಫಲವಾಗಿದೆ. <br /><br />೬. ಇಂದಿನ ಶಿಕ್ಷಣ ಪದ್ದತಿ ಮಾಹಿತಿ ಸಂಗ್ರಹಕ್ಕೆ ಅತೀ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಿದೆ. ಬದುಕಿನ ಕಲೆಯನ್ನ ನೀಡುವಲ್ಲಿ ಸೋಲುತ್ತಿದೆ. ಹೀಗಿದ್ದರೂ ಅದ್ಯಾಪಕರುಗಳು ಶಿಕ್ಷಣ ಕ್ಷೇತ್ರದ ಕೇಂದ್ರ ಬಿಂದು. They have to deliver the goods. ಅದ್ಯಾಪಕರುಗಳಿಗೆ ಸಾಕಷ್ಟು ಸ್ವಾತಂತ್ರ್ಯ ಈ ಪದ್ದತಿಯಲ್ಲಿದೆ. ಅದನ್ನ ಉಪಯೋಗಿಸಿಕೊಂಡು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಜವಾಬ್ದಾರಿಯನ್ನ ಅರಿತಾಗ He can make a person, otherwise he will break a person. <br /><br />೭. -ಬೇರೆಲ್ಲಿಯೂ ಸಲ್ಲದವರು ಇಂದು ನಮ್ಮ ದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರಾಗುತ್ತಿದ್ದಾರೆ.(ಕೆಲವೊಂದು <br /> ಅಪವಾದಗಳಿರಬೊಹುದು). ಇದು ತಪ್ಪಬೇಕು.<br /> -ಶಿಕ್ಷಕರಾಗಿ ಬರುವವರಿಗೆ ಕೆಲವೊಂದು ಪ್ರಾಥಮಿಕ ಕೌಶಲ್ಯಗಳ ಬಗ್ಗೆ ತರಬೇತಿ ನೀಡಬೇಕು<br /> -ಶಿಕ್ಷಕರನ್ನ ನೇಮಿಸುವಾಗ ಮೀಸಲಾತಿ ನಿಯಮ ಅನುಸರಿಸಬಾರದು. ಅರ್ಹತೆ ಮಾತ್ರ ಅಳತೆಗೋಲಾಗಬೇಕು.<br /> -ಶಿಕ್ಷಕ ವಿದ್ಯಾರ್ಥಿ ratio 1:40 ಗಿಂತ ಮೀರಬಾರದು.<br /> -ಆದ್ಯಾತ್ಮವನ್ನು ಶಿಕ್ಷಣದಿಂದ ಬೇರ್ಪಡಿಸಿರುವುದು ನಮ್ಮ ದೇಶದ ದುರಂತಅರವಿಂದhttps://www.blogger.com/profile/06813576454185264146noreply@blogger.com