.....

೦೧.
ರಗ್ಗು ಹೊದ್ದು ಮಲಗಿರುವುದೇ?
ಪರಮಹಂಸರಿಗೆ ಮಲ್ಲಿಗೆ

ವಾಸನೆ
ಹೊಂದುವುದೆ?

೦೨.
ರೈಲು
ಒಮ್ಮೆಗೇ ಹೊಗೆ ತುಂಬಿಕೊಂಡು
ನಿಂತುಹೋಯಿತು,
ಜನರು ಗೊತ್ತಲ್ಲ.
ಬಾಳೇಕಾಯಿ ಬಜ್ಜಿ ಮಾರುವವನು
ಕರ್ತವ್ಯ ಪ್ರಙ್ಞೆ ಮರೆತಿರಲಿಲ್ಲ.

೦೩.
ರೈಲು ನಿಲ್ದಾಣದಲ್ಲಿ ಹಳಿಯ ಪಕ್ಕ
ಓಡಾಡುತ್ತಿದ್ದ ಇಲಿಗಳಿಗೆ
ಯಾಕೆ ಇಷ್ಟು ಜನ ಓಡಾಡುತ್ತಾರೆ
ಎಂಬುದು
ಘಟರವನ್ನು ದಾಟುವಾಗೆಲ್ಲಾ
ಕಾಡುತ್ತಿದ್ದ ಪ್ರಶ್ನೆ

೦೪.
ವಿಙ್ಞಾನಿ ಕಲಾವಿದನಾಗಿ
ಊರಿಂದ ಹೊರಡುವ ಬಸ್ಸುಗಳಿಗೆಲ್ಲ
ಹೆಸರುಗಳನ್ನು
ಬರೆದುಕೊಡುತ್ತಿದ್ದ

೦೫.
ಒಂದು ಬುಡ ಕಡಿದ ಮರ
ಬುದ್ಧನ ಸ್ಥೂಪದ ಪಕ್ಕ
ಹೊತ್ತು ಮುಳುಗುವ ಹೊತ್ತು
ಒಂದಿಷ್ಟು ಸದ್ದು
ಅಲ್ಲೊಂದಿಷ್ಟು ವಿಚಿತ್ರ ಕೋತಿಗಳು
ಆಟವಾಡುತ್ತಿದ್ದವು.






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ