ಮಹಾನವಮಿ


ಮಹಾನವಮಿ-
"ಅಸ್ಮಿತೆ ಹಾಗೂ ಸ್ವಾತಂತ್ರ್ಯಗಳ ನಡುವಿನ ಜೀವಿತ ಪ್ರಜ್ಞೆ"
ಅಂತ
ಒಂದು ಕವನ ಬರ್ದೆ.

ಮೊದಲಲ್ಲಿ,
ಪ್ರಶ್ನೆ-ಉತ್ತರ-ಅದರ ನೋವೂ ಸಂಕಟ
ಸತ್ಯ-ಮಿಥ್ಯ-ಅದರೊಂದಿಗಿಷ್ಟು ಪರಮ ಸತ್ಯ,
ಜೊತೆಗಿರ್ಲಿ ಅಂತ
ಕೆಂಡದಲ್ಲಿ ಸುಟ್ಟ ಮನುಷ್ಯ
ಅವ್ನ ಬೂದೀಲಿ ಅರಳಿದ ಹೂವಿಗೊಂದು ದುಂಭಿ
ದುಂಭಿಗಾಗಿ ಮನುಷ್ಯನ ಸರ್ವ ತಂತ್ರ ಪ್ರಯತ್ನ.
(ಅದೇ ಮನುಷ್ಯಾನ ಅಥವಾ ಬೇರೆ ಯಾರಾದರೂ ಆಗಿರ್ಬೋದಾ...?)

ಕವಿತೇನ ಮುಂದುವರಿಸ್ಲೇ ಬೇಕು,
"ಹುಡುಗಿಯ ಮಾತೆತ್ತದ ಕವಿತೇನ ಬರೆಸಿಬಿಡು"
ಅಂತ ಕೇಳ್ಕೊಳ್ತಾ
ತಾಯಿ ಮತ್ತೆ ಹುಡುಗಿ, ಒಂದಿಷ್ಟು ಹಾಲು
ಅಂತ ಏನೇನೋ ಬರ್ದು
ಕಡೆಗೆ ಬರ್ದೆ ನೋಡೀ
"ಬರೆಸಿಬಿಡು,
ನಾ ಎಡವಿ ಬಿದ್ದ ತೆಲೆ ಬುರುಡೆಯ ಹಣೆ ಬರಹವನ್ನ
ಒಂದು ಕವಿತೆಯಾಗಿ"

ಕವಿತೇನೂ ಮುಗಿಸ್ಬೇಕು.
"ಸತ್ತ ಹಲ್ಲೀನ ಆಯ್ಕೊಂಡು ತಿಂತಿದ್ದ ಮನುಷ್ಯ
ಮುಟ್ಟು ನಿಂತ ಸೂಳೆ ಮನೇಗೋಗಿ
ಆತ್ಮಹತ್ಯೆ ಮಾಡ್ಕೊಂಡ"

ಕಡೇ ಸಾಲಲ್ಲಿ ನಮ್ಮೂರ ದಾಸಯ್ಯ ಹೇಳ್ದ
"ಮೀರ್ಬೇಕು ಅಂತಂದ್ಕೊಂಡವ
ಅನ್ಬವಾನೇ ಮೀರ್ಬಿಡ್ಬೇಕು ಕಣಾ"
ಅಂತೇಳಿ
ಮುಗಿಸಿಬಿಟ್ಟೆ.

ನಿಜಕ್ಕೂ ಒಂದು ಕವನಾನ ಮುಗಿಸ್ಲಿಕ್ಕೆ ಆಗುತ್ತಾ ಅನ್ನೋದೂ ನಂಗೆ ತಿಳೀತಿಲ್ಲ
ಆದ್ರೂ
ನಾನೂ ಈ ಕವನಾನ ಮುಗಿಸ್ತಾ ಇದ್ದೀನಿ....


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ